ಹಸಿವು

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ
ಅವನಂತೆ ತಿರುಗಣಿಯ ಗೋಳಾಟವಾಡುವ
ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ?
ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ
ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು
ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು ನಾಲಗೆ ಜೊಲ್ಲುತ್ತಿದೆ
ಎಳೆಯುತಿದೆ ಮುಗಿಲ ಸೆರಗನ್ನು
ಜಾರಿ ಬೀಳುತ್ತದೆ ನಾಚಿಕೆ ನೀರಾಗಿ
ಹಸಿದ ನೀರು ಹರಿಹರಿದು ಓಡುತಿದೆ ತಳ ಕಾಣುವನಕ
ತಳಹೊಟ್ಟೆತಗ್ಗುಗಳು ತುಂಬಿದರೂ ಒಳಕರುಳು ಕಳವಳಿಸುತ್ತವೆ
ಆಸೆ ಹೆಡೆ ಒಡೆತೆನೆಯೆತ್ತಿ ಚಾಚುತ್ತದೆ ಆಗಸಕ್ಕಾಯೆಂದು ಬಾಯಿ
ತುರೀಯ ಚುಂಬನದ ಸವಿಜೇನಿಗಾಗಿ
ಇಲ್ಲಿ ಕೆಳಗಿನೊಳಗೆ ಜೀವ ಜೀವಗಳು ಚರ್ಮಸುಲಿದು
ರಕ್ತ ಕುಡಿದು ಮಾಂಸ ನೆಣ ಕಿತ್ತು ತಿನ್ನುತ್ತಿವೆ
ಒಂದರ ಜೀವ ಇನ್ನೊಂದರ ಸಾವು
ಗಂಡು ಹೆಣ್ಣಿಗಾಗಿ ಹೆಣ್ಣು ಗಂಡಿಗಾಗಿ
ಹಸಿದು ಹಸಿವಿಂಗಿಸಲೆಂದೇ ಹಬ್ಬಿಸಿಕೊಂಡಿವೆ ಹೊಕ್ಕುಳಬಳ್ಳಿಗಳ
ತೆರೆದುಕೊಂಡಿವೆ ಬಸಿರು ಭಾವಗಳ
ಹೊಸೆಯುತ್ತಿವೆ ಒಡಲ ಹಗ್ಗಕಗ್ಗಗಳ
ಈ ಹಸಿವಿಗಿಲ್ಲ ತಿಂದು ತೇಗಿದ ತೃಪ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೋಸೆಹಿಟ್ಟು ನದಿಯಾದದ್ದು
Next post ವಂದೇ ಮಾತರಂ ಓಕೆ ಕಡ್ಡಾಯ ಯಾಕೆ?

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys